ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಫೆ. 28ರಂದು ಸಮರ್ಪಿಸಲಿರುವ ಸ್ವರ್ಣ ಪಲ್ಲಕಿಯನ್ನು ಮಂಗಳವಾರ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಯಿತು.
ಉಡುಪಿಯ ಸ್ವರ್ಣ ಜ್ಯುವೆಲ್ಲರ್ಸ್ ನವರು ಈ ಪಲ್ಲಕ್ಕಿಯನ್ನು ತಯಾರಿಸಿದ್ದು ಬಪ್ಪನಾಡು ದೇವಾಲಯದ ಪ್ರಮುಖರಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
ಬಪ್ಪನಾಡು ದೇವಾಲಯ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಇದನ್ನು ನಿರ್ಮಿಸಲಾಗಿದೆ. ಸ್ವರ್ಣ ಪಲ್ಲಕಿಯನ್ನು ಸುಮಾರು 11ಕೆ.ಜಿ. ಚಿನ್ನ ಬಳಸಿ ತಯಾರಿಸಲಾಗಿದೆ ಸ್ವರ್ಣ ಜ್ಯುವೆಲ್ಲರ್ಸ್ ನವರು ತಿಳಿಸಿದ್ದಾರೆ.
ಪಲ್ಲಕಿಯನ್ನು ಮಂಗಳವಾರ ಉಡುಪಿಯಿಂದ ಮೂಲ್ಕಿ ವೆಂಕಟರಮಣ ದೇವಾಲಯಕ್ಕೆ ತಂದು ಅಲ್ಲಂದ ವೈಭವದ ಮೆರವಣಿಗೆಯಲ್ಲಿ ಬಪ್ಪನಾಡು ಕ್ಷೇತ್ರಕ್ಕೆ ತರಲಾಯಿತು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ